ಗ್ರಾಮ ಘಟಕದ ಸಿಪಿಎಂ ಕಾರ್ಯದರ್ಶಿ ಎ. ಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಕನ್ನಡ ಭಾಷೆ ಹಾಗೂ ಕನ್ನಡಿಗರ ಅಭಿವೃದ್ಧಿಗೆ ಮಾರಾಕವಾಗಿದೆ. ಈ ನೀತಿಯ ಜಾರಿಯಿಂದ ದಲಿತ, ಹಿಂದೂಳಿದ ವರ್ಗದ ಬಡ ಜನರು ಮೂಲಶಿಕ್ಷಣ ದಿಂದ ವಂಚಿತರಾಗುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಥಿಕ ಲಾಭಕ್ಕಾಗಿ ಈ ನೀತಿ ಜಾರಿಗೆ ಬರುತ್ತಿರುವುದು ದುರಂತದ ವಿಚಾರ. ಶೀಘ್ರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನೀತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.