ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮ್ಸ್ ಮೈದಾನದಲ್ಲಿ ಕ್ರಿಕೆಟ್ ಕ್ರೀಡಾಂಗಣ ಅಭಿವೃದ್ಧಿ ಸಲ್ಲದು: ವಕೀಲ ನಾಗಭೂಷಣ

Last Updated 8 ಮಾರ್ಚ್ 2021, 6:35 IST
ಅಕ್ಷರ ಗಾತ್ರ

ಬಳ್ಳಾರಿ: 'ವಿಮ್ಸ್ ಮೈದಾನದಲ್ಲಿ ಕ್ರಿಕೆಟ್ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಅರಿಸ್ಟೋಕ್ರಾಟ್ ಸಂಸ್ಥೆಗೆ ವಹಿಸಬಾರದು. ಮೈದಾನವನ್ನು ಈಗ ಇರುವ ಸ್ಥಿತಿಯಲ್ಲೇ ಉಳಿಸಬೇಕು' ಎಂದುವಕೀಲ ನಾಗಭೂಷಣ ಅವರು ಆಗ್ರಹಿಸಿದರು.

'ವಿಮ್ಸ್ ಮೈದಾನದಲ್ಲಿ ಈಗ ನಡೆಯುತ್ತಿರುವಂತೆ ಎಲ್ಲ‌ ಕ್ರೀಡಾ ತರಬೇತಿ, ನಾಗರಿಕರ ವ್ಯಾಯಾಮ ಮತ್ತು‌ ವಾಕಿಂಗ್‌ ಚಟುವಟಿಕೆಗಳು ಆತಂಕವಿಲ್ಲದೆ ಮುಂದುವರಿಯಲು ಅನುವು ಮಾಡಬೇಕು' ಎಂದು‌ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

'ವಿಮ್ಸ್ ಮೈದಾನವನ್ನು ಖಾಸಗಿಯವರಿಗೆ ವಹಿಸುವ ಬದಲು ನಗರದ ಕೋಟೆ ಪ್ರದೇಶದಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕಾಗಿಯೇ ಮೀಸಲಿರುವ ಯುವ‌ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 5 ಎಕೆರಯನ್ನು ಅಭಿವೃದ್ಧಿಪಡಿಸಲಿ' ಎಂದು ಆಗ್ರಹಿಸಿದರು.

ಕರ್ನಾಟಕ ಜನಸೈನ್ಯ ಸಂಘಟನೆಯ ಕೆ.ಎರ್ರಿಸ್ವಾಮಿ, ಸಾರಿಗೆ ಸಂಸ್ಥೆ ಕಾರ್ಮಿಕ ಮುಖಂಡ ಆದಿಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT