ಹೊಸಪೇಟೆ: ಇಲ್ಲಿ ಆಯೋಜಿಸಿರುವ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೀಪ ಬೆಳಗಿಸಿ ಚಾಲನೆ ನೀಡಿದರು.
ಅರಣ್ಯ ಸಚಿವ ಆನಂದ್ ಸಿಂಗ್, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಮುಖಂಡರಾದ ಸಿದ್ದೇಶ ಯಾದವ್, ತಿಪ್ಪೇಸ್ವಾಮಿ, ಬಂಗಾರು ಹನುಮಂತ, ಚನ್ನಬಸವನಗೌಡ ಪಾಟೀಲ, ಬಸವರಾಜ ನಾಲತ್ವಾಡ, ಕವಿತಾ ಈಶ್ವರ್ ಸಿಂಗ್ ಇದ್ದಾರೆ.
ಇದಕ್ಕೂ ಮುನ್ನ ಗಣ್ಯರಿಗೆ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಈ ಸಮಾವೇಶ ಆಯೋಜಿಸಿದೆ.