‘ಎರಡು ದಿನದ ಕ್ಯಾಮೆರಾ ಮೆಮೊರಿ ಕಾರ್ಡ್ ಅನ್ನು ಪರಿಶೀಲಿಸಿದ್ದು, ಚಿರತೆ ಚಲನವಲನ ದಾಖಲಾಗಿಲ್ಲ. ಚಿರತೆ ಸಂಚರಿಸುವ ಪ್ರದೇಶದಲ್ಲಿ ನಿತ್ಯವೂ ಕ್ಯಾಮೆರಾಗಳನ್ನು ವಿವಿಧ ಕೋನಗಳಲ್ಲಿ ಅಳವಡಿಸಲಾಗುತ್ತಿದೆ. ಆದರೂ ಚಿರತೆ ರಾತ್ರಿ ಸಂಚಾರ ಕಂಡುಬರುತ್ತಿಲ್ಲ. ಸದ್ಯ ಐದು ಬೋನ್ಗಳನ್ನು ಅಳವಡಿಸಲಾಗಿದೆ. ಬಾಲಕನನ್ನು ಹೊತ್ತೊಯ್ದ ಎರದಮಟ್ಟಿ ಪ್ರದೇಶದಲ್ಲಿ ಭಾರಿ ಮುಳ್ಳು ಪೊದೆ ತೆರವುಗೊಳಿಸಿ 12 ದಾರಿಗಳನ್ನು ಜೆಸಿಬಿ ಯಂತ್ರದಿಂದ ಮಾಡಲಾಗಿದೆ’ ಎಂದು ಉಪ ವಲಯ ಅರಣ್ಯ ಅಧಿಕಾರಿ ಎಸ್. ದೇವರಾಜ್ ವಿವರಿಸಿದರು.