ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಪೀಠದ ಹಾಲಿ ಪೀಠಾಧಿಪತಿಯಾಗಿದ್ದಾರೆ. ಆದರೆ, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ತ್ರಿಲೋಚನಾ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಉಜ್ಜಯಿನಿ ಪೀಠದ ನೂತನ, ಅಧಿಕೃತ ಪೀಠಾಧಿಪತಿಯೆಂದು ಘೋಷಿಸಲಾಗಿದೆ. ಈಗ ಇದೇ ವಿಷಯ ವಿವಾದ ಸೃಷ್ಟಿಸಿದೆ. ಭಕ್ತರಲ್ಲಿ ಗೊಂದಲ ಮೂಡಿಸಿದೆ.