ಇಲ್ಲಿನ ವಿದ್ಯಾನಗರ ನಿವಾಸಿ ನಾಗರಾಜ ಮತ್ತು ಅವರ ಪತ್ನಿ ಪ್ರಾಣಾಪಾಯದಿಂದ ಪಾರಾದವರು. ಕ್ರೈಸ್ತಧರ್ಮದ ಚರ್ಚ್ನಲ್ಲಿ ಪ್ರಾರ್ಥನೆ ಮುಗಿಸಿಕೊಂಡು ವಾಪಾಸ್ ಮನೆಗೆ ತೆರಳುತ್ತಿದ್ದ ವೇಳೆ ಕೌಲ್ಬಜಾರ್ ಎರಡನೇ ರೈಲ್ವೇ ಗೇಟ್ ಬಳಿಯಿರುವ ಹೋಟೇಲ್ ಸಮೀಪ ಅವಘಡ ನಡೆದಿದೆ. ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಆತಂಕಕ್ಕೊಳಗಾದ ದಂಪತಿ ಕಾರಿನಿಂದಇಳಿದು ಹೊರಬಂದಿದ್ದಾರೆ. ಈ ವೇಳೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.