14ರಂದು ನಗರದ ಕನಕದಾಸ ವೃತ್ತದ ಬಳಿ ಮ್ಯಾಸಕೇರಿಯ ಅಣ್ಣತಮ್ಮ ಜೆ.ಹನುಮೇಶ್, ಜೆ.ಷಣ್ಮುಖ ಅವರಿಂದ 20 ಸಾವಿರ ಮೌಲ್ಯದ ಗಾಂಜಾ, ಬೈಕ್, ಎರಡು ಮೊಬೈಲ್ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 15ರಂದು ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಗಾಂಜಾ ಮಾಡುತ್ತಿದ್ದ ವಿದ್ಯಾರ್ಥಿಗಳಾದ ಕೂಡ್ಲಿಗಿ ತಾಲ್ಲೂಕಿನ ಕಾನಹೊಸಳ್ಳಿಯ ಎಂ.ಎಚ್.ಮಧು ಹಾಗೂ ತಾಲ್ಲೂಕಿನ ಧರ್ಮಸಾಗರದ ಎಂ.ಸುರೇಶ್ಕುಮಾರ್ ಅವರನ್ನು ಬಂಧಿಸಿ, ಅವರಿಂದ 1,05,200 ಮೌಲ್ಯದ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.