ಹಂಪಿ ನಿವಾಸಿ ಶಿವರಾಜ ನ್ಯಾಯಾಂಗ ಬಂಧನಕ್ಕೆ ಒಳಗಾದ ಯುವಕ. ‘ಅರಣ್ಯ ಸಚಿವ ಆನಂದ್ ಸಿಂಗ್ ಅವರು ಬಡವರಿಗೆ ವಿತರಿಸಲು ಆಹಾರದ ಕಿಟ್ಗಳನ್ನು ಸಿದ್ಧಪಡಿಸುತ್ತಿರುವ ಚಿತ್ರಗಳು ಏ.10ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆ ಚಿತ್ರಗಳನ್ನು ಆಯ್ದುಕೊಂಡು, ಅದರ ಅಡಿಯಲ್ಲಿ ‘ಸಿಂಗ್ ಅವರು ಮುಸ್ಲಿಮರಿಂದ ಕಿಟ್ಗಳನ್ನು ತಯಾರಿಸುತ್ತಿದ್ದಾರೆ. ಅದರಿಂದ ಕೊರೊನಾ ಸೋಂಕು ತಗುಲಬಹುದು. ಹಾಗಾಗಿ ಯಾರೂ ಕಿಟ್ಗಳನ್ನು ಪಡೆಯಬಾರದು’ ಎಂದು ಶಿವರಾಜ ಪೋಸ್ಟ್ ಮಾಡಿದ್ದರು. ಈ ಕುರಿತು ಬಿಜೆಪಿ ಕಾರ್ಯಕರ್ತ ಬಸವರಾಜ ಎನ್ನುವವರು ಭಾನುವಾರ ದೂರು ಕೊಟ್ಟಿದ್ದರು. ಆ ದೂರಿನ ಮೇರೆಗೆ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.