‘ಬಜೆಟ್ ನಲ್ಲಿ ಚಾಲಕರಿಗೆ ಅಭಿವೃದ್ಧಿ ನಿಗಮ ಅಥವಾ ಕಲ್ಯಾಣ ಮಂಡಳಿಯನ್ನು ಘೋಷಿಸಿ ₹1,000 ಕೋಟಿ ಮೀಸಲಿಡಬೇಕು. ವಾಹನ ಚಾಲಕರಿಗೆ ನಿವೇಶನ, ವಾಹನ ಸ್ಕ್ರ್ಯಾಪ್ ಪಾಲಿಸಿ ತಿದ್ದುಪಡಿ ವಾಪಸಾತಿ, ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಚಾಲಕರಿಗೆ ₹7,500 ಪರಿಹಾರ, ಅಗತ್ಯ ವಸ್ತುಗಳು, ತೈಲ ಬೆಲೆ ಇಳಿಸುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗುವುದು’ ಎಂದು ವಿವರಿಸಿದರು.