‘ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭಗೊಳ್ಳುವವರೆಗೆ ಯಾವ ಭಾಗಕ್ಕೂ ಬಸ್ಗಳನ್ನು ಓಡಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಅವರು ಸೋಮವಾರ ಬಳ್ಳಾರಿಗೆ ಬಸ್ ಬಿಟ್ಟಿದ್ದಾರೆ. ಇದರಿಂದ ನಮಗೆ ನಷ್ಟ ಉಂಟಾಗುತ್ತದೆ. ಇದನ್ನೇ ಪ್ರಶ್ನಿಸಿದ್ದೆವು. ಸರ್ಕಾರದ ಸೂಚನೆ ಇರುವುದರಿಂದ ಬಸ್ ಬಿಡಲಾಗಿದೆ ಎಂದು ಆರ್ಟಿಒ ಅಧಿಕಾರಿಗಳು ತಿಳಿಸಿದರು. ಹೀಗಾಗಿ ಸುಮ್ಮನಾದೆವು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಖಾಸಗಿ ಬಸ್ ಚಾಲಕ ತಿಳಿಸಿದರು.