ಬೋಳುಬಾಯಿ ಹನುಮಂತಪ್ಪ ಎಂಬುವರಿಗೆ ಈ ಕುರಿಗಳು ಸೇರಿದ್ದವು. ‘ಚಿರತೆ ದಾಳಿ ನಡೆಸಿ ನಮ್ಮ ಹನ್ನೆರಡು ಕುರಿಗಳನ್ನು ಸಾಯಿಸಿದೆ. ತಡರಾತ್ರಿ ಕುರಿಗಳು ಏಕಾಏಕಿ ಜೋರಾಗಿ ಕಿರುಚಲು ಆರಂಭಿಸಿದವು. ನಾಲ್ಕೈದು ಜನ ಹೋಗಿ ನೋಡಿದಾಗ ಚಿರತೆ ಕುರಿಗಳ ರಕ್ತ ಹೀರುತ್ತಿತ್ತು. ನಮ್ಮನ್ನು ಕಂಡೊಡನೆ ಅಲ್ಲಿಂದ ಚಂಗನೆ ಓಡಿ ಹೋಗಿದೆ. ಸ್ವಲ್ಪ ತಡವಾದರೂ ಇನ್ನಷ್ಟು ಕುರಿಗಳನ್ನು ಅದು ಸಾಯಿಸುತ್ತಿತ್ತು’ ಎಂದು ಹನುಮಂತಪ್ಪ ತಿಳಿಸಿದರು.