‘ದೇವದಾಸಿಯರು, ಹಿಂದುಳಿದ ವರ್ಗದವರಿಗೆ ನಿವೇಶನ ಕೊಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಆನಂದ್ ಸಿಂಗ್ ತಲೆಗೆ ಹಾಕಿಕೊಂಡಿಲ್ಲ. ನಗರದಲ್ಲಿ ನಿವೇಶನ ಕೊಡಲು ಜಮೀನು ಇಲ್ಲ ಎಂದು ನುಣುಚಿಕೊಂಡಿದ್ದಾರೆ. ಆದರೆ, 30–40 ಎಕರೆ ವಿಶಾಲ ಪ್ರದೇಶದಲ್ಲಿ ಲೇಔಟ್, ಭವ್ಯ ಬಂಗಲೆ ನಿರ್ಮಿಸುತ್ತಿದ್ದಾರೆ. ಅವರ ಐಷಾರಾಮಿ ಜೀವನಕ್ಕೆ ಎಲ್ಲ ಬೇಕು. ಆದರೆ, ಬಡವರಿಗೆ ಏನು ಬೇಡವೇ?’ ಎಂದು ಪ್ರಶ್ನಿಸಿದರು.