ಹೊಸಪೇಟೆ (ವಿಜಯನಗರ): ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ₹5 ಲಕ್ಷ ಮೌಲ್ಯದ ಈರುಳ್ಳಿ ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ಗಾದಿಗನೂರಿನಲ್ಲಿ ಸೋಮವಾರ ನಡೆದಿದೆ.
ಗ್ರಾಮದ ರೈತ ರುದ್ರಪ್ಪ ಎಂಬುವರು ಮೂರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಬೆಂಬಲ ಬೆಲೆ ಇಲ್ಲದ ಕಾರಣ ಶೆಡ್ನಲ್ಲಿ ದಾಸ್ತಾನು ಮಾಡಿ ಇಟ್ಟಿದ್ದರು. ಸೋಮವಾರ ಈರುಳ್ಳಿ ದಾಸ್ತಾನಿಗೆ ಬೆಂಕಿ ತಗುಲಿ ಸುಟ್ಟು ಹೋಗಿದೆ.
ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಅಷ್ಟೊತ್ತಿಗೆ ದಾಸ್ತಾನು ಮಾಡಲಾಗಿದ್ದ 500 ಚೀಲ ಈರುಳ್ಳಿ ಪೈಕಿ ಬಹುತೇಕ ಸುಟ್ಟು ಹೋಗಿತ್ತು.