<p><strong>ಹೊಸಪೇಟೆ:</strong> ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ನಾಲ್ಕು ದಿನಗಳಲ್ಲೇ ಕಳ್ಳತನ ಪ್ರಕರಣ ಬೇಧಿಸಿ, ಚಿನ್ನದ ನಾಣ್ಯ, ನಗದು ಹಾಗೂ ಇಬ್ಬರನ್ನು ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ.</p>.<p>ನ. 6ರಂದು ಹಂಪಿ ರಸ್ತೆಯ ಮುನೀರ್ ಟ್ರ್ಯಾಕ್ಟರ್ ಶೋ ರೂಂನಲ್ಲಿ ಕಳ್ಳತನ ನಡೆದಿತ್ತು. ₹16,44,000 ನಗದು, ಗ್ರಾಹಕರಿಗೆ ಬಹುಮಾನದ ರೂಪದಲ್ಲಿ ಕೊಡಲು ತಂದಿಟ್ಟಿದ್ದ ₹44,000 ಮೌಲ್ಯದ ಚಿನ್ನದ ನಾಣ್ಯವನ್ನು ಕಳ್ಳರು ಕದೊಯ್ದಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.</p>.<p>ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಇಲ್ಲಿನ ಅನಂತಶಯನಗುಡಿಯ ನಿವಾಸಿ, ಆಟೊ ಚಾಲಕ ಹುಲುಗಪ್ಪ ಹನುಮಂತಪ್ಪ (22), ಮುನೀರ್ ಶೋ ರೂಂನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಪ್ಪರದಹಳ್ಳಿಯ ನಿವಾಸಿ ಆಸಿಫ್ ಸತ್ತಾರ್ ಸಾಬ್ (28) ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರಿಂದ ₹44,000 ಮೌಲ್ಯದ 10 ಗ್ರಾಂ ಬಂಗಾರದ ನಾಣ್ಯ ಮತ್ತು ₹15,80,000 ನಗದು ವಶಪಡಿಸಿಕೊಂಡಿದ್ದಾರೆ.</p>.<p>ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ, ಸಿಬ್ಬಂದಿ ಎಚ್.ಸಿ.ಬಿ. ರಾಘವೇಂದ್ರ, ಪಿ. ಮಾಣಿಕ್ಯ ರೆಡ್ಡಿ, ಎ. ಕೊಟ್ರೇಶ್, ಓ. ರಮೇಶ ಅವರನ್ನು ಒಳಗೊಂಡ ಪೊಲೀಸ್ ತಂಡ ಪ್ರಕರಣ ಬೇಧಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ನಾಲ್ಕು ದಿನಗಳಲ್ಲೇ ಕಳ್ಳತನ ಪ್ರಕರಣ ಬೇಧಿಸಿ, ಚಿನ್ನದ ನಾಣ್ಯ, ನಗದು ಹಾಗೂ ಇಬ್ಬರನ್ನು ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ.</p>.<p>ನ. 6ರಂದು ಹಂಪಿ ರಸ್ತೆಯ ಮುನೀರ್ ಟ್ರ್ಯಾಕ್ಟರ್ ಶೋ ರೂಂನಲ್ಲಿ ಕಳ್ಳತನ ನಡೆದಿತ್ತು. ₹16,44,000 ನಗದು, ಗ್ರಾಹಕರಿಗೆ ಬಹುಮಾನದ ರೂಪದಲ್ಲಿ ಕೊಡಲು ತಂದಿಟ್ಟಿದ್ದ ₹44,000 ಮೌಲ್ಯದ ಚಿನ್ನದ ನಾಣ್ಯವನ್ನು ಕಳ್ಳರು ಕದೊಯ್ದಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.</p>.<p>ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಇಲ್ಲಿನ ಅನಂತಶಯನಗುಡಿಯ ನಿವಾಸಿ, ಆಟೊ ಚಾಲಕ ಹುಲುಗಪ್ಪ ಹನುಮಂತಪ್ಪ (22), ಮುನೀರ್ ಶೋ ರೂಂನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಪ್ಪರದಹಳ್ಳಿಯ ನಿವಾಸಿ ಆಸಿಫ್ ಸತ್ತಾರ್ ಸಾಬ್ (28) ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರಿಂದ ₹44,000 ಮೌಲ್ಯದ 10 ಗ್ರಾಂ ಬಂಗಾರದ ನಾಣ್ಯ ಮತ್ತು ₹15,80,000 ನಗದು ವಶಪಡಿಸಿಕೊಂಡಿದ್ದಾರೆ.</p>.<p>ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ, ಸಿಬ್ಬಂದಿ ಎಚ್.ಸಿ.ಬಿ. ರಾಘವೇಂದ್ರ, ಪಿ. ಮಾಣಿಕ್ಯ ರೆಡ್ಡಿ, ಎ. ಕೊಟ್ರೇಶ್, ಓ. ರಮೇಶ ಅವರನ್ನು ಒಳಗೊಂಡ ಪೊಲೀಸ್ ತಂಡ ಪ್ರಕರಣ ಬೇಧಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>