ತೋರಣಗಲ್ಲು:‘ಉದ್ಯೋಗದಿಂದ ವಜಾ ಮಾಡಿರುವ ಆದೇಶವನ್ನು ವಾಪಸ್ ಪಡೆದು ಮತ್ತೆಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿಕಿಚಿಡಿ ಪ್ರಕಾಶ್ ಎಂಬುವವರು ‘ಐ ನೀಡ್ ಜಸ್ಟೀಸ್ ಫಾರ್ ಮೈ ಲೈಫ್’ ಫಲಕ ಪ್ರದರ್ಶಿಸಿ ಜಿಂದಾಲ್ ಸಂಸ್ಥೆಯ ಮುಖ್ಯ ದ್ವಾರದ ಬಳಿ ಸೋಮವಾರ ಏಕಾಂಗಿಯಾಗಿ ಧರಣಿ ನಡೆಸಿದರು.
‘ಪ್ರಕಾಶ್ ಅವರು ಧರಣಿ ನಡೆಸಲು ಅನುಮತಿ ಪಡೆದಿರಲಿಲ್ಲ. ವಿಷಯ ತಿಳಿದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತೆರಳುವಷ್ಟರಲ್ಲಿ ಜಿಂದಾಲ್ ಸಂಸ್ಥೆಯವರು ಅವರನ್ನು ಒಳಕ್ಕೆ ಕರೆದೊಯ್ದಿದ್ದರು’ ಎಂದು ತೋರಣಗಲ್ಲು ಠಾಣೆಯ ಪಿಎಸ್ಐ ಏ.ಕಾಳಿಂಗ ತಿಳಿಸಿದರು.