ಸೂಕ್ತ ರಕ್ಷಣೆ ಹಾಗೂ ಪೋಷಣೆ ಇಲ್ಲದೆ ಬಾವಿಯು ಶಿಥಿಲಾವಸ್ಥೆಗೆ ತಲುಪಿತ್ತು. ಹಿಂದಿನ ವರ್ಷ ಸ್ಥಳೀಯ ಶ್ರೀಕುಮಾರಸ್ವಾಮಿ ಮಿನರಲ್ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ (ಎಸ್ಕೆಎಂಇ) ಕಂಪನಿಯರು ₹8.70 ಲಕ್ಷ ವೆಚ್ಚದಲ್ಲಿ ಬಾವಿಯಲ್ಲಿನ ಹೂಳನ್ನು ತೆಗೆಸಿದ್ದರು. ಶಿಥಿಲಾ ವಸ್ಥೆಗೆ ತಲುಪಿದ್ದ ಬಾವಿಯ ಕಟ್ಟಡವನ್ನು ಭದ್ರಗೊಳಿಸಿ, ಸುತ್ತಲೂ ತಂತಿ ಬೇಲಿ ಹಾಕಿಸಿ ರಕ್ಷಣೆ ಒದಗಿಸಿದ್ದರು.