ಪಶ್ಚಿಮವಲಯದಲ್ಲಿ ಡಾ. ವಿಷ್ಣುವರ್ಧನ್ ಸಭಾಂಗಣವಿದ್ದು, ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಪ್ರತಿವಾರ 2 ದಿನ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಬೇಕು. ಪ್ರತಿ ವಲಯಕ್ಕೆ ಒಂದು ಮೊಬೈಲ್ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲು ವ್ಯಾನ್ ಖರೀದಿ, ಮಕ್ಕಳ ಪ್ರತಿಭೆ ಗುರುತಿಸಲು ‘ಮೇಕರ್ಸ್ ಸ್ಪೇಸ್’ ಯೋಜನೆ ಜಾರಿ, ಗ್ರಂಥಾಲಯಗಳ ಸ್ವಚ್ಛತಾ ಸಿಬ್ಬಂದಿ, ಸಹಾಯಕರಿಗೆ ಕನಿಷ್ಠ ವೇತನ ಪಾವತಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.