‘ಪ್ರಮುಖ ಆರೋಪಿ ಸರವಣನ್, ಆಗಾಗ ಬಿಹಾರದ ಪಟ್ನಾಗೆ ಹೋಗುತ್ತಿದ್ದ. ಅಲ್ಲಿಯ ವ್ಯಕ್ತಿಯೊಬ್ಬರಿಗೆ ಅಸಲಿ ನೋಟುಗಳ
₹ 25 ಸಾವಿರ ನೀಡಿ, ₹ 1 ಲಕ್ಷ ಮೊತ್ತಕ್ಕೆ ಖೋಟಾ ನೋಟುಗಳನ್ನು ತರುತ್ತಿದ್ದ. ಅದೇ ಖೋಟಾನೋಟುಗಳನ್ನು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಸಹಚರರ ಜೊತೆ ಸೇರಿ ಚಲಾವಣೆ ಮಾಡುತ್ತಿದ್ದ’ ಎಂದು ತಿಳಿಸಿದರು.