ಬೆಂಗಳೂರು: ಸಾರ್ವಜನಿಕ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ಸೈಕಲ್ಗಳನ್ನು ಕದಿಯುತ್ತಿದ್ದ ಆರೋಪದಡಿ ಬಾಲರಾಜ್ ಎಂಬುವರನ್ನು ಸುದ್ದಗುಂಟೆಪಾಳ್ಳ ಪೊಲೀಸರು ಬಂಧಿಸಿದ್ದಾರೆ.
‘ಮದ್ಯವ್ಯಸನಿ ಆಗಿದ್ದ ಬಾಲರಾಜ್, ಮದ್ಯ ಖರೀದಿಗೆ ಹಣ ಹೊಂದಿಸಲು ಸೈಕಲ್ ಕದಿಯುತ್ತಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ. ಈತನಿಂದ ₹ 6 ಲಕ್ಷ ಮೌಲ್ಯದ 54 ಸೈಕಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಸುದ್ದಗುಂಟೆಪಾಳ್ಯದ ಮನೆಯೊಂದರ ಮುಂದೆ ನಿಲ್ಲಿಸಿದ್ದ ಸೈಕಲ್ ಕಳ್ಳತನ ಆಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ’ ಎಂದೂ ತಿಳಿಸಿದರು.
‘ಕದ್ದು ಸೈಕಲ್ಗಳನ್ನು ಆರೋಪಿ ಕೇವಲ ₹ 2 ಸಾವಿರ– ₹ 3 ಸಾವಿರಕ್ಕೆ ಮಾರುತ್ತಿದ್ದ. ಬಂದ ಹಣವನ್ನು ಮದ್ಯ ಖರೀದಿಗೆ ಖರ್ಚು ಮಾಡುತ್ತಿದ್ದ. ಹಣ ಖಾಲಿಯಾಗುತ್ತಿದ್ದಂತೆ ಪುನಃ ಕಳ್ಳತನಕ್ಕೆ ಇಳಿಯುತ್ತಿದ್ದ’ ಎಂದೂ ಹೇಳಿದರು.