ಪಾದಚಾರಿ ಮಾರ್ಗಗಳಲ್ಲಿ ಹಾಗೂ ಟ್ರಾಫಿಕ್ ಜಂಕ್ಷನ್ಗಳಲ್ಲಿ ನಿರ್ಭಯವಾಗಿ ನಡೆದಾಡುವ ಹಕ್ಕನ್ನು ಜನತೆಗೆ ಕಲ್ಪಿಸಬೇಕು. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಕೆಂಪು ದೀಪ ಉರಿಯುವಾಗಲೂ ನಿಯಮ ಉಲ್ಲಂಘಿಸಿ ಕೆಲವು ವಾಹನ ಸವಾರರು ಮುನ್ನುಗ್ಗುತ್ತಾರೆ. ಇದರಿಂದಾಗಿ ರಸ್ತೆ ದಾಟುವವರು ಅಪಘಾತಕ್ಕೀಡಾಗುತ್ತಿದ್ದಾರೆ. ಹೀಗಾಗಿ, ಪಾದಚಾರಿಗಳ ಸುರಕ್ಷತೆಗೆ ಕ್ರಮಕೈಗೊಳ್ಳಬೇಕು ಎಂದು ಸಂಘಟನೆಯ ಶ್ರೀನಿವಾಸ ಅಲವಿಲ್ಲಿ ಒತ್ತಾಯಿಸಿದರು.