ಮೈಸೂರಿಗೆ ಸಂಬಂಧಿಸಿದ ಕೆಲವು ವಿಚಾರಗಳ ಕುರಿತು ಇಬ್ಬರ ಮಧ್ಯೆ ಸಂಬಂಧ ಹಳಸಿದೆ. ರಾಯಚೂರು ಉಸ್ತುವಾರಿಯಿಂದ ತೆಗೆದು ಎಚ್.ಎಂ.ರೇವಣ್ಣ ಅವರನ್ನು ನೇಮಿಸಿದ ಬಳಿಕ ಭಿನ್ನಮತ ಇನ್ನಷ್ಟು ತಾರಕಕ್ಕೆ ಏರಿದೆ. ರಾಯಚೂರು ಉಸ್ತುವಾರಿಯಿಂದ ತೆಗೆಯುವ ಸೂಚನೆ ಸಿಗುತ್ತಿದ್ದಂತೆ, ಮುಜುಗರ ಆಗಬಾರದು ಎಂದು ತಮ್ಮನ್ನು ಉಸ್ತುವಾರಿಯಿಂದ ಮುಕ್ತಿಗೊಳಿಸುವಂತೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು ಎಂದು ಮೂಲಗಳು ಹೇಳಿವೆ.