ಬೆಂಗಳೂರು: ಬೆಂಗಳೂರಿನಿಂದ ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಸಂಪರ್ಕಿಸುವ ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ವಿಶೇಷ ಉದ್ದೇಶಿತ ಘಟಕ (ಎಸ್ಪಿವಿ) ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಈ ಘಟಕದ ಮೂಲ ನಿಧಿಯಾಗಿ ₹345 ಕೋಟಿ ಅನುದಾನ ಒದಗಿಸಲು ಬುಧವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ರೈಲ್ವೆ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಜಂಟಿಯಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಿದೆ. ಮೊದಲ ಹಂತದ ಯೋಜನೆಗೆ ₹1,745 ಕೋಟಿ ಬೇಕಾಗಲಿದೆ ಎಂದು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
2018ರಿಂದ 2020ರ ಅವಧಿಗೆ ಇಷ್ಟು ಹಣ ನೀಡಬೇಕು. ಮೂರು ವರ್ಷದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. 58 ರೈಲುಗಳು ಉಪನಗರ ಮಾರ್ಗಗಳಲ್ಲಿ ಓಡಾಡಲಿವೆ ಎಂದೂ ಅವರು ತಿಳಿಸಿದರು.