ದೆಹಲಿಯ ಎಐಎಂಎಸ್ನ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ಮುಖ್ಯಸ್ಥ ಡಾ.ಜಿ.ಕೆ.ರತ್,`ಬಾಯಿ ಕ್ಯಾನ್ಸರ್ ಪರಿಣಾಮ ಗಂಭೀರವಾದುದು. ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಬೇಕು. ಈ ಚಿಕಿತ್ಸೆಯಲ್ಲಿರುವ ತೊಡಕುಗಳನ್ನು ನಿವಾರಿಸಲು ಮತ್ತು ಅರಿವು ಮೂಡಿಸಲು ಅಸ್ತಿತ್ವಕ್ಕೆ ತಂದಿರುವ ಕಾರ್ಯಪಡೆ ದೇಶದಲ್ಲಿಯೇ ಅತಿ ದೊಡ್ಡ ಯೋಜನೆ ಎನಿಸಿದೆ. ಇದು ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ನಿಯಂತ್ರಿಸಲು ಸಂಶೋಧನೆ ನಡೆಸಲಿದೆ’ ಎಂದರು.