ಆತ್ಮಹತ್ಯೆ ಪ್ರಕರಣಗಳೆಂದು ವರದಿಯಾಗಿದ್ದ ಪ್ರಕರಣಗಳ ಪೈಕಿ 448 ಮಂದಿಯ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. 76 ಪ್ರಕರಣಗಳಲ್ಲಿ ಪರಿಹಾರದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಆಕಸ್ಮಿಕ ಮರಣಗಳ ಪ್ರಕರಣಗಳಲ್ಲಿ 307 ಮಂದಿಯ ಕುಟುಂಬಗಳಿಗೆ ಪರಿಹಾರ ನೀಡಿದ್ದು, 42 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆತ್ಮಹತ್ಯೆ ಪ್ರಕರಣಗಳಲ್ಲಿ 113 ಮತ್ತು ಆಕಸ್ಮಿಕ ಮರಣದ ಪ್ರಕರಣಗಳಲ್ಲಿ 109 ರೈತರ ಕುಟುಂಬಗಳಿಗೆ ಪರಿಹಾರ ಪಾವತಿ ಬಾಕಿ ಇದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.