ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬಸ್ ಪೇಟೆ: ₹30 ಲಕ್ಷ ಬೆಲೆಯ ಮರ ತುಂಡು ವಶ

Published 9 ಡಿಸೆಂಬರ್ 2023, 18:48 IST
Last Updated 9 ಡಿಸೆಂಬರ್ 2023, 18:48 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಪರವಾನಗಿ ಪಡೆಯದೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ₹30 ಲಕ್ಷ ಬೆಲೆಯ ಮರದ ತುಂಡುಗಳನ್ನು ನೆಲಮಂಗಲ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನೆಲಮಂಗಲ ವಲಯ ಅರಣ್ಯಾಧಿಕಾರಿ ಶ್ರೀಧರ್ ಎಸ್. ಮತ್ತು ಸಿಬ್ಬಂದಿ ಯಂಟಗಾನಹಳ್ಳಿ ಟೋಲ್ ಬಳಿ ಗುರುವಾರ ರಾತ್ರಿ, ಕುಣಿಗಲ್ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕ್ಯಾಂಟರ್ ವಾಹನವನ್ನು ಪರಿಶೀಲಿಸಿದಾಗ ಬೀಟೆ, ಹಲಸು, ಹೊನ್ನೆಮರದ ತುಂಡಗಳು ಪತ್ತೆಯಾಗಿದ್ದವು.

ಸಕಲೇಶಪುರದಿಂದ ತಂದಿರುವುದಾಗಿ ಚಾಲಕ ಕುಮಾರ್‌ ಟಿ. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಲಸು, ಹೊನ್ನೆ ಮರಗಳಿಗೆ ಮಾತ್ರ ಅನುಮತಿ ಪಡೆದು, ಅವುಗಳೊಂದಿಗೆ ಅನುಮತಿ ಇಲ್ಲದೇ ಬೀಟೆ ಮರದ ತುಂಡುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ನೆಲಮಂಗಲ ವಲಯ ಅರಣ್ಯಾಧಿಕಾರಿ ಶ್ರೀಧರ್.ಎಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT