ಅಂಧ ಐಎಎಸ್ ಅಧಿಕಾರಿ ಮತ್ತು ಪುದಿಚೇರಿಯಲ್ಲಿ ಜಿಲ್ಲಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿರುವ ಸತೇಂದರ್ ಸಿಂಗ್ ಅವರಿಗೆ ‘ಸಾರ್ವಜನಿಕ ಸನ್ಮಾನ ಸಮರ್ಪಣೆ’ ಪ್ರಶಸ್ತಿ, ಜೈನ್ ರೋಲ್ ಮಾಡೆಲ್ ಉದ್ಯೋಗಿ ಸಂಜಯ್ ಶ್ರೀಕಾಂತ್, ಸ್ವಯಂ ಉದ್ಯೋಗಿ ಕಮಲ್ ಮಾಲು, ಕ್ರೀಡಾಪಟು ಮಾನಸಾ, ಸಮಾಜ ಸೇವಕ ನಾಗನಗೌಡ ಅವರಿಗೆ ‘ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ (ಎನ್.ಎಫ್.ಬಿ.) ಎಕ್ಸಲೆನ್ಸಿ’ ಪ್ರಶಸ್ತಿ, ಅಂಕಿತ್ ಜಿಂದಾಲ್, ಬಿ.ಎಸ್. ವೆಂಕಟೇಶ್, ಪ್ರಜ್ವಲ್ ಹಾಗೂ ಪೃಥ್ವಿ ಅವರಿಗೆ ‘ಎನ್.ಎಫ್.ಬಿ. ಡಿಗ್ನಿಟಿ ಆಫ್ ದಿ ಕಮ್ಯೂನಿಟಿ’ ಪ್ರಶಸ್ತಿ, ಗಟಕ್ ಸಿಂಗ್ ಮತ್ತು ಸದಾಶಿವಯ್ಯ ಅವರಿಗೆ ‘ಶ್ರೇಷ್ಠ ಮಾನವ ಸೇವಾ’ ಸನ್ಮಾನ, ವೀರಭದ್ರಯ್ಯ ಅವರಿಗೆ ‘ಹಿರಿಯ ನಾಗರಿಕ ಸನ್ಮಾನ’ ಮತ್ತು ಲಕ್ಷ್ಮೀ ದೇವಿ ಅವರಿಗೆ ಸ್ವಯಂ ಸಬಲ ಮಹಿಳಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.