‘ಎಂ. ನಾಗೇಂದ್ರ ಅವರಿಗೆ, ದೊಮ್ಮಲೂರು ಲೇಔಟ್ ನಿವಾಸಿ ರಾಮ್ ಮೋಹನ್ ಅವರು ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ನಾಗೇಂದ್ರ, ಇಂದಿರಾನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸುತ್ತಿದ್ದ ಇನ್ಸ್ಪೆಕ್ಟರ್ ರಾಮಮೂರ್ತಿ, ಕೃತ್ಯವೇ ನಡೆದಿಲ್ಲವೆಂದು ನ್ಯಾಯಾಲಯಕ್ಕೆ ಬಿ–ವರದಿ ಸಲ್ಲಿಸಲು ಒಪ್ಪಿದ್ದರು. ಅದಕ್ಕಾಗಿ ಅವರು ಹಾಗೂ ಇತರೆ ಸಿಬ್ಬಂದಿ ₹10 ಲಕ್ಷ ಲಂಚ ಪಡೆದಿದ್ದರು ಎಂಬ ಆರೋಪವಿದೆ’ ಎಂದೂ ಮೂಲಗಳು ತಿಳಿಸಿವೆ.