‘ಕ್ರೇನ್ ಆಪರೇಟರ್ ಆಗಿದ್ದ ಸೆಲ್ವಕುಮಾರ್, ತಮ್ಮ ಬೈಕ್ನಲ್ಲಿ ಸುಮ್ಮನಹಳ್ಳಿ ಕಡೆಯಿಂದ ಎಫ್ಟಿಐ ವೃತ್ತದ ಕಡೆಗೆ ಹೊರ ವರ್ತುಲ ರಸ್ತೆಯಲ್ಲಿ ಹೊರಟಿದ್ದರು. ಮಾರ್ಗಮಧ್ಯೆಯೇ ರಸ್ತೆಯಲ್ಲಿ ಯಾವುದೇ ಸೂಚನೆ ಪಾಲಿಸದೇ ಲಾರಿ ನಿಲುಗಡೆ ಮಾಡಲಾಗಿತ್ತು. ಅದೇ ಲಾರಿಗೆ ಸೆಲ್ವಕುಮಾರ್ ಬೈಕ್ ಗುದ್ದಿ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.