<p><strong>ಬೆಂಗಳೂರು: </strong>ನಗರದ ಮೂರು ಕಡೆ ಭಾನುವಾರ ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಕಾರ್ಮಿಕರು ಸೇರಿ ಮೂವರು ಮೃತಪಟ್ಟಿದ್ದಾರೆ.</p>.<p>‘ಡಿ.ಜೆ. ಹಳ್ಳಿಯ ಅಂಬೇಡ್ಕರ್ ನಗರ ನಿವಾಸಿ ಚಿರಂಜೀವಿ (34), ಮುನಿರಾಜು ಹಾಗೂ ಮಹದೇವಪುರ ನಿವಾಸಿ ಸೆಲ್ವಕುಮಾರ್ (37) ಮೃತರು. ರಾಜಾಜಿನಗರ ಹಾಗೂ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸರು ಹೇಳಿದರು.</p>.<p>‘ಕೂಲಿ ಕಾರ್ಮಿಕ ಚಿರಂಜೀವಿ, ಬಳ್ಳಾರಿ ರಸ್ತೆಯ ಕಾಫಿ ಡೇ ಬಳಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡು ಅವರು ಮೃತಪಟ್ಟಿದ್ದಾರೆ.’</p>.<p>‘ಇನ್ನೊಂದು ಪ್ರಕರಣದಲ್ಲಿ ಕೋಗಿಲು ಹಾಗೂ ಬೆಳ್ಳಳ್ಳಿ ನಡುವಿನ ರಸ್ತೆಯಲ್ಲಿ ಬೈಕ್ ಗುದ್ದಿದ್ದರಿಂದಾಗಿ ಮುನಿರಾಜು (34) ಎಂಬುವರು ಸಾವಿಗೀಡಾಗಿದ್ದಾರೆ. ಇವರು ಸಹ ಕೂಲಿ ಕಾರ್ಮಿಕರು’ ಎಂದು ಪೊಲೀಸರು ತಿಳಿಸಿದರು.</p>.<p class="Subhead">ಕ್ರೇನ್ ಆಪರೇಟರ್ ಸಾವು; ನಂದಿನಿ ಲೇಔಟ್ ಬಳಿ ಹಾದು ಹೋಗಿರುವ ಹೊರವರ್ತುಲ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಗುದ್ದಿದ್ದು, ಅಪಘಾತದಿಂದ ತೀವ್ರ ಗಾಯಗೊಂಡು ಸವಾರ ಸೆಲ್ವಕುಮಾರ್ ಅಸುನೀಗಿದ್ದಾರೆ.</p>.<p>‘ಕ್ರೇನ್ ಆಪರೇಟರ್ ಆಗಿದ್ದ ಸೆಲ್ವಕುಮಾರ್, ತಮ್ಮ ಬೈಕ್ನಲ್ಲಿ ಸುಮ್ಮನಹಳ್ಳಿ ಕಡೆಯಿಂದ ಎಫ್ಟಿಐ ವೃತ್ತದ ಕಡೆಗೆ ಹೊರ ವರ್ತುಲ ರಸ್ತೆಯಲ್ಲಿ ಹೊರಟಿದ್ದರು. ಮಾರ್ಗಮಧ್ಯೆಯೇ ರಸ್ತೆಯಲ್ಲಿ ಯಾವುದೇ ಸೂಚನೆ ಪಾಲಿಸದೇ ಲಾರಿ ನಿಲುಗಡೆ ಮಾಡಲಾಗಿತ್ತು. ಅದೇ ಲಾರಿಗೆ ಸೆಲ್ವಕುಮಾರ್ ಬೈಕ್ ಗುದ್ದಿ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದ ಮೂರು ಕಡೆ ಭಾನುವಾರ ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಕಾರ್ಮಿಕರು ಸೇರಿ ಮೂವರು ಮೃತಪಟ್ಟಿದ್ದಾರೆ.</p>.<p>‘ಡಿ.ಜೆ. ಹಳ್ಳಿಯ ಅಂಬೇಡ್ಕರ್ ನಗರ ನಿವಾಸಿ ಚಿರಂಜೀವಿ (34), ಮುನಿರಾಜು ಹಾಗೂ ಮಹದೇವಪುರ ನಿವಾಸಿ ಸೆಲ್ವಕುಮಾರ್ (37) ಮೃತರು. ರಾಜಾಜಿನಗರ ಹಾಗೂ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸರು ಹೇಳಿದರು.</p>.<p>‘ಕೂಲಿ ಕಾರ್ಮಿಕ ಚಿರಂಜೀವಿ, ಬಳ್ಳಾರಿ ರಸ್ತೆಯ ಕಾಫಿ ಡೇ ಬಳಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡು ಅವರು ಮೃತಪಟ್ಟಿದ್ದಾರೆ.’</p>.<p>‘ಇನ್ನೊಂದು ಪ್ರಕರಣದಲ್ಲಿ ಕೋಗಿಲು ಹಾಗೂ ಬೆಳ್ಳಳ್ಳಿ ನಡುವಿನ ರಸ್ತೆಯಲ್ಲಿ ಬೈಕ್ ಗುದ್ದಿದ್ದರಿಂದಾಗಿ ಮುನಿರಾಜು (34) ಎಂಬುವರು ಸಾವಿಗೀಡಾಗಿದ್ದಾರೆ. ಇವರು ಸಹ ಕೂಲಿ ಕಾರ್ಮಿಕರು’ ಎಂದು ಪೊಲೀಸರು ತಿಳಿಸಿದರು.</p>.<p class="Subhead">ಕ್ರೇನ್ ಆಪರೇಟರ್ ಸಾವು; ನಂದಿನಿ ಲೇಔಟ್ ಬಳಿ ಹಾದು ಹೋಗಿರುವ ಹೊರವರ್ತುಲ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಗುದ್ದಿದ್ದು, ಅಪಘಾತದಿಂದ ತೀವ್ರ ಗಾಯಗೊಂಡು ಸವಾರ ಸೆಲ್ವಕುಮಾರ್ ಅಸುನೀಗಿದ್ದಾರೆ.</p>.<p>‘ಕ್ರೇನ್ ಆಪರೇಟರ್ ಆಗಿದ್ದ ಸೆಲ್ವಕುಮಾರ್, ತಮ್ಮ ಬೈಕ್ನಲ್ಲಿ ಸುಮ್ಮನಹಳ್ಳಿ ಕಡೆಯಿಂದ ಎಫ್ಟಿಐ ವೃತ್ತದ ಕಡೆಗೆ ಹೊರ ವರ್ತುಲ ರಸ್ತೆಯಲ್ಲಿ ಹೊರಟಿದ್ದರು. ಮಾರ್ಗಮಧ್ಯೆಯೇ ರಸ್ತೆಯಲ್ಲಿ ಯಾವುದೇ ಸೂಚನೆ ಪಾಲಿಸದೇ ಲಾರಿ ನಿಲುಗಡೆ ಮಾಡಲಾಗಿತ್ತು. ಅದೇ ಲಾರಿಗೆ ಸೆಲ್ವಕುಮಾರ್ ಬೈಕ್ ಗುದ್ದಿ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>