‘ವೈಯಕ್ತಿಕ ಕಾರಣದಿಂದ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಮನವಿಯನ್ನು ಅಂಗೀಕರಿಸಿ’ ಎಂದು ಭಾಸ್ಕರ್ ರಾವ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ 2021ರ ಸೆಪ್ಟೆಂಬರ್ನಲ್ಲಿ ಪತ್ರ ನೀಡಿದ್ದರು. ಪತ್ರ ಪರಿಶೀಲಿಸಿರುವ ಮುಖ್ಯ ಕಾರ್ಯದರ್ಶಿ, ರಾಜೀನಾಮೆ ಅಂಗೀಕರಿಸಿ ಆದೇಶ ಪತ್ರವನ್ನು ಭಾಸ್ಕರ ರಾವ್ ಅವರಿಗೆ ಕಳುಹಿಸಿದ್ದಾರೆ.