‘ನನ್ನ ಜಮೀನಿನಲ್ಲಿ ವಾರ್ಷಿಕ 45 ಕ್ವಿಂಟಲ್ ರಾಗಿ ಬೆಳೆಯುತ್ತಿದ್ದು, ಕಲಬೆರಕೆ ಬೀಜದಿಂದ ಕೇವಲ 18 ಕ್ವಿಂಟಲ್ ಇಳುವರಿ ಬಂದಿದೆ. 27 ಕ್ವಿಂಟಲ್ ನಷ್ಟವಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆ (2018-19) ಪ್ರಕಾರ 27 ಕ್ವಿಂಟಲ್ಗೆ ₹ 78,219 ನಷ್ಟವಾಗಿದೆ. ಜೊತೆಗೆ ಮಾನಸಿಕ, ದೈಹಿಕ ತೊಂದರೆ, ಪ್ರಕರಣ ದಾಖಲಿಸಲು ತಗಲಿದ ವೆಚ್ಚವನ್ನು ಭರಿಸಿಕೊಡಬೇಕು’ ಎಂದು ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ನರಸೇಗೌಡ ದೂರು ನೀಡಿದ್ದರು.