<p><strong>ಯಲಹಂಕ: </strong>ಮಣಿಪಾಲ್ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಖಿಲಭಾರತ ರಸಪ್ರಶ್ನೆ ಸ್ಪರ್ಧೆಯಲ್ಲಿ(ಎರಡನೇ ಆವೃತ್ತಿ) ಜೈಪುರದ ಕೇಂಬ್ರಿಡ್ಜ್ ಕೋರ್ಟ್ ಪ್ರೌಢಶಾಲೆ ಚಾಂಪಿಯನ್ ಆಗಿದೆ.</p><p>ಅಲ್ಲಿನ ವಿದ್ಯಾ ರ್ಥಿಗಳಾದ ಧಾರಿಯಾ ಮತ್ತು ವೈಭವ್ ರೈ ₹ 1.50 ಲಕ್ಷ ಮೊತ್ತದ ಚೆಕ್ ಮತ್ತು ಪ್ರಶಸ್ತಿಪತ್ರ ಪಡೆದರು. ಎರಡನೇ ಸ್ಥಾನ ಪಡೆದ ಕೊಚ್ಚಿಯ ಅಸ್ಸಿಸಿ ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯ ಜಿಯಾನ್ ಜೊಮಿ ಮತ್ತು ಅಖಿಲ್ ಕೃಷ್ಣನ್ ಯು.ಆರ್. ₹ 1 ಲಕ್ಷ, ಮೂರನೇ ಸ್ಥಾನ ಪಡೆದ ಡೆಲ್ಲಿ ಪಬ್ಲಿಕ್ ಸ್ಕೂಲ್ನ ಪರ್ವ ಜೈನ್ ಮತ್ತು ಅರ್ಘ ಜೈನ್ ₹ 50 ಸಾವಿರ ಬಹುಮಾನ ಪಡೆದರು.</p><p>ಮಣಿಪಾಲ್ ಉನ್ನತಶಿಕ್ಷಣ ಸಂಸ್ಥೆಯ ಕುಲಪತಿ ಮಧು ವೀರರಾಘವನ್ ಮಾತನಾಡಿ, ‘ಇಂತಹ ಸ್ಪರ್ಧೆಗಳು ಜ್ಞಾನವನ್ನು ಪರೀಕ್ಷಿಸುವುದಲ್ಲದೆ ಸಹನಶೀಲ, ಸಮಸ್ಯೆ ಪರಿಹಾರ ಮತ್ತು ಸ್ನೇಹ ಮನೋಭಾವಯನ್ನು ಉತ್ತೇಜಿಸುತ್ತದೆ’ ಎಂದು ತಿಳಿಸಿದರು.</p><p>ಸಂಸ್ಥೆಯ ಉಪ ಕುಲಸಚಿವರಾದ ರಾಘವೇಂದ್ರ ಪ್ರಭು, ಸ್ವೀಕೃತಿ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯ ಅಧಿಕಾರಿ ಆದಿತ್ಯ ಮೋಹನ್ ಜಾಧವ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: </strong>ಮಣಿಪಾಲ್ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಖಿಲಭಾರತ ರಸಪ್ರಶ್ನೆ ಸ್ಪರ್ಧೆಯಲ್ಲಿ(ಎರಡನೇ ಆವೃತ್ತಿ) ಜೈಪುರದ ಕೇಂಬ್ರಿಡ್ಜ್ ಕೋರ್ಟ್ ಪ್ರೌಢಶಾಲೆ ಚಾಂಪಿಯನ್ ಆಗಿದೆ.</p><p>ಅಲ್ಲಿನ ವಿದ್ಯಾ ರ್ಥಿಗಳಾದ ಧಾರಿಯಾ ಮತ್ತು ವೈಭವ್ ರೈ ₹ 1.50 ಲಕ್ಷ ಮೊತ್ತದ ಚೆಕ್ ಮತ್ತು ಪ್ರಶಸ್ತಿಪತ್ರ ಪಡೆದರು. ಎರಡನೇ ಸ್ಥಾನ ಪಡೆದ ಕೊಚ್ಚಿಯ ಅಸ್ಸಿಸಿ ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯ ಜಿಯಾನ್ ಜೊಮಿ ಮತ್ತು ಅಖಿಲ್ ಕೃಷ್ಣನ್ ಯು.ಆರ್. ₹ 1 ಲಕ್ಷ, ಮೂರನೇ ಸ್ಥಾನ ಪಡೆದ ಡೆಲ್ಲಿ ಪಬ್ಲಿಕ್ ಸ್ಕೂಲ್ನ ಪರ್ವ ಜೈನ್ ಮತ್ತು ಅರ್ಘ ಜೈನ್ ₹ 50 ಸಾವಿರ ಬಹುಮಾನ ಪಡೆದರು.</p><p>ಮಣಿಪಾಲ್ ಉನ್ನತಶಿಕ್ಷಣ ಸಂಸ್ಥೆಯ ಕುಲಪತಿ ಮಧು ವೀರರಾಘವನ್ ಮಾತನಾಡಿ, ‘ಇಂತಹ ಸ್ಪರ್ಧೆಗಳು ಜ್ಞಾನವನ್ನು ಪರೀಕ್ಷಿಸುವುದಲ್ಲದೆ ಸಹನಶೀಲ, ಸಮಸ್ಯೆ ಪರಿಹಾರ ಮತ್ತು ಸ್ನೇಹ ಮನೋಭಾವಯನ್ನು ಉತ್ತೇಜಿಸುತ್ತದೆ’ ಎಂದು ತಿಳಿಸಿದರು.</p><p>ಸಂಸ್ಥೆಯ ಉಪ ಕುಲಸಚಿವರಾದ ರಾಘವೇಂದ್ರ ಪ್ರಭು, ಸ್ವೀಕೃತಿ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯ ಅಧಿಕಾರಿ ಆದಿತ್ಯ ಮೋಹನ್ ಜಾಧವ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>