ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಈವರೆಗೆ ಶಾಂತಿಯುತ ಪ್ರತಿಭಟನೆಗಳಷ್ಟೇ ನಡೆದಿದೆ. ಇವುಗಳನ್ನು ಹತ್ತಿಕ್ಕುವ ಬದಲು ಪ್ರಜಾಸತ್ತಾತ್ಮಕ ಸಂವಾದಕ್ಕೆ ಸರ್ಕಾರ ಮುಂದಾಗಬೇಕು ಎಂದು ಹಿರಿಯ ಲೇಖಕ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
‘ಪ್ರತಿಭಟನೆಗೆ ಅವಕಾಶ ನಿರಾಕರಿಸುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಭಿನ್ನಾಭಿಪ್ರಾಯವನ್ನು ಬಲದಿಂದ ಬಗ್ಗುಬಡಿಯುವುದು ಭ್ರಮೆ’ ಎಂದಿದ್ದಾರೆ.