‘ಕೇರಳದ ಸಾಜೀರ್ (36), ಸಲೀಂ (30), ಚಾರ್ಲ್ಸ್ (34), ವಿಜು (41) ಹಾಗೂ ನೌಷಾದ್ (46) ಬಂಧಿತರು. ಅಕ್ರಮ ಹಣ ಸಂಪಾದಿಸಲು ತಂಡ ಕಟ್ಟಿಕೊಂಡಿದ್ದ ಆರೋಪಿಗಳು, ₹ 15 ಕೋಟಿ ಮೊತ್ತಕ್ಕೆ ತಿಮಿಂಗಿಲದ ವಾಂತಿ ಮಾರಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.