<p><strong>ಬೆಂಗಳೂ</strong>ರು: ಕೇರಳದ ಮೀನುಗಾರರಿಂದ ತಿಮಿಂಗಿಲದ ವಾಂತಿ ಖರೀದಿಸಿ ತಂದು ನಗರದಲ್ಲಿ ಮಾರಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಕೇರಳದ ಸಾಜೀರ್ (36), ಸಲೀಂ (30), ಚಾರ್ಲ್ಸ್ (34), ವಿಜು (41) ಹಾಗೂ ನೌಷಾದ್ (46) ಬಂಧಿತರು. ಅಕ್ರಮ ಹಣ ಸಂಪಾದಿಸಲು ತಂಡ ಕಟ್ಟಿಕೊಂಡಿದ್ದ ಆರೋಪಿಗಳು, ₹ 15 ಕೋಟಿ ಮೊತ್ತಕ್ಕೆ ತಿಮಿಂಗಿಲದ ವಾಂತಿ ಮಾರಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಸುಗಂಧ ದ್ರವ್ಯ ತಯಾರಿಸಲು ತಿಮಿಂಗಿಲದ ವಾಂತಿ ಬೇಕಾಗಿದೆ. ಎಷ್ಟು ಕೋಟಿ ಹಣವಾದರೂ ನೀಡುತ್ತೇನೆ’ ಎಂಬುದಾಗಿ ವ್ಯಕ್ತಿ<br />ಯೊಬ್ಬರು ಹೇಳಿದ್ದರು. ವಾಂತಿಗಾಗಿ ಆರೋಪಿಗಳು ಹುಡುಕಾಟ ಆರಂಭಿಸಿದ್ದರು. ಸಮುದ್ರದ ದಡದಲ್ಲಿ ಸಿಕ್ಕಿದ್ದ ತಿಮಿಂಗಿಲದ ವಾಂತಿಯನ್ನು ಕೆಲ ಮೀನುಗಾರರು ಸಂಗ್ರಹಿಸಿಟ್ಟುಕೊಂಡಿದ್ದರು. ಅವರನ್ನು ಸಂಪರ್ಕಿಸಿದ್ದ ಆರೋಪಿಗಳು, ಹಣ ನೀಡಿ ವಾಂತಿ ಖರೀದಿಸಿದ್ದರು.‘</p>.<p>‘ಆರೋಪಿಗಳು ವಾಂತಿ ಸಮೇತ ಮಾರ್ಚ್ 30ರಂದು ಬೆಂಗಳೂರಿಗೆ ಬಂದಿದ್ದರು. ₹ 15 ಕೋಟಿ ಮೌಲ್ಯಕ್ಕೆ ವಾಂತಿ ಮಾರಲು ಯತ್ನಿಸುತ್ತಿದ್ದರೆಂಬುದು ಗೊತ್ತಾಗಿದೆ. ಆದರೆ, ಅಷ್ಟು ಮೊತ್ತಕ್ಕೆ ವಾಂತಿ ಖರೀದಿಸುತ್ತಿದ್ದ ವ್ಯಕ್ತಿಯ ಹೆಸರು ಏನು ಹಾಗೂ ವಾಂತಿಯನ್ನು ಆತ ಯಾವುದಕ್ಕೆ ಬಳಸುತ್ತಿದ್ದ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ’ ಎಂದು ಪೊಲೀಸರು ತಿಳಿಸಿದರು.</p>.<p>‘ಸುಗಂಧ ದ್ರವ್ಯ ತಯಾರಿಕೆಯಲ್ಲಿ ತಿಮಿಂಗಿಲದ ವಾಂತಿ ಬಳಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೆಲೆಯೂ ಇದೆ. ಜಪ್ತಿ ಮಾಡಿರುವ ವಾಂತಿಯ ಬೆಲೆ ₹ 15 ಕೋಟಿ ಇದೆಯಾ ಎಂಬುದನ್ನು ತಿಳಿಯಲು ತನಿಖೆ<br />ಮುಂದುವರಿಸಲಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂ</strong>ರು: ಕೇರಳದ ಮೀನುಗಾರರಿಂದ ತಿಮಿಂಗಿಲದ ವಾಂತಿ ಖರೀದಿಸಿ ತಂದು ನಗರದಲ್ಲಿ ಮಾರಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಕೇರಳದ ಸಾಜೀರ್ (36), ಸಲೀಂ (30), ಚಾರ್ಲ್ಸ್ (34), ವಿಜು (41) ಹಾಗೂ ನೌಷಾದ್ (46) ಬಂಧಿತರು. ಅಕ್ರಮ ಹಣ ಸಂಪಾದಿಸಲು ತಂಡ ಕಟ್ಟಿಕೊಂಡಿದ್ದ ಆರೋಪಿಗಳು, ₹ 15 ಕೋಟಿ ಮೊತ್ತಕ್ಕೆ ತಿಮಿಂಗಿಲದ ವಾಂತಿ ಮಾರಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಸುಗಂಧ ದ್ರವ್ಯ ತಯಾರಿಸಲು ತಿಮಿಂಗಿಲದ ವಾಂತಿ ಬೇಕಾಗಿದೆ. ಎಷ್ಟು ಕೋಟಿ ಹಣವಾದರೂ ನೀಡುತ್ತೇನೆ’ ಎಂಬುದಾಗಿ ವ್ಯಕ್ತಿ<br />ಯೊಬ್ಬರು ಹೇಳಿದ್ದರು. ವಾಂತಿಗಾಗಿ ಆರೋಪಿಗಳು ಹುಡುಕಾಟ ಆರಂಭಿಸಿದ್ದರು. ಸಮುದ್ರದ ದಡದಲ್ಲಿ ಸಿಕ್ಕಿದ್ದ ತಿಮಿಂಗಿಲದ ವಾಂತಿಯನ್ನು ಕೆಲ ಮೀನುಗಾರರು ಸಂಗ್ರಹಿಸಿಟ್ಟುಕೊಂಡಿದ್ದರು. ಅವರನ್ನು ಸಂಪರ್ಕಿಸಿದ್ದ ಆರೋಪಿಗಳು, ಹಣ ನೀಡಿ ವಾಂತಿ ಖರೀದಿಸಿದ್ದರು.‘</p>.<p>‘ಆರೋಪಿಗಳು ವಾಂತಿ ಸಮೇತ ಮಾರ್ಚ್ 30ರಂದು ಬೆಂಗಳೂರಿಗೆ ಬಂದಿದ್ದರು. ₹ 15 ಕೋಟಿ ಮೌಲ್ಯಕ್ಕೆ ವಾಂತಿ ಮಾರಲು ಯತ್ನಿಸುತ್ತಿದ್ದರೆಂಬುದು ಗೊತ್ತಾಗಿದೆ. ಆದರೆ, ಅಷ್ಟು ಮೊತ್ತಕ್ಕೆ ವಾಂತಿ ಖರೀದಿಸುತ್ತಿದ್ದ ವ್ಯಕ್ತಿಯ ಹೆಸರು ಏನು ಹಾಗೂ ವಾಂತಿಯನ್ನು ಆತ ಯಾವುದಕ್ಕೆ ಬಳಸುತ್ತಿದ್ದ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ’ ಎಂದು ಪೊಲೀಸರು ತಿಳಿಸಿದರು.</p>.<p>‘ಸುಗಂಧ ದ್ರವ್ಯ ತಯಾರಿಕೆಯಲ್ಲಿ ತಿಮಿಂಗಿಲದ ವಾಂತಿ ಬಳಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೆಲೆಯೂ ಇದೆ. ಜಪ್ತಿ ಮಾಡಿರುವ ವಾಂತಿಯ ಬೆಲೆ ₹ 15 ಕೋಟಿ ಇದೆಯಾ ಎಂಬುದನ್ನು ತಿಳಿಯಲು ತನಿಖೆ<br />ಮುಂದುವರಿಸಲಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>