‘ವಿದೇಶದಲ್ಲಿ ನೆಲೆಸಿರುವ ದೂರುದಾರ, ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಜ. 24ರಂದು ತ್ಯಾಗರಾಜನಗರದಿಂದ ಮಲ್ಲೇಶ್ವರದ 7ನೇ ಅಡ್ಡರಸ್ತೆಯಲ್ಲಿರುವ ಆಸ್ಪತ್ರೆಗೆ ರಂಗಸ್ವಾಮಿ ಆಟೊದಲ್ಲಿ ಪ್ರಯಾಣಿಸಿದ್ದರು. ಹಣ ಹಾಗೂ ದಾಖಲೆಗಳಿದ್ದ ಬ್ಯಾಗ್ ಆಟೊದಲ್ಲಿಟ್ಟಿದ್ದ ದೂರುದಾರ, ‘ಆಸ್ಪತ್ರೆಯೊಳಗೆ ಹೋಗಿ ಬರುತ್ತೇನೆ. ಸ್ವಲ್ಪ ಸಮಯ ಕಾಯಿರಿ. ವಾಪಸು ತ್ಯಾಗರಾಜನಗರಕ್ಕೆ ಹೋಗೋಣ’ ಎಂಬುದಾಗಿ ಹೇಳಿ ಆಸ್ಪತ್ರೆಯೊಳಗೆ ಹೋಗಿದ್ದರು.’