‘ಉತ್ತರ ಭಾರತದ ನಿವಾಸಿಯಾಗಿರುವ ಸೇನೆ ಅಧಿಕಾರಿ, ಅ. 14ರಂದು ಕೆಲಸ ನಿಮಿತ್ತ ನಗರಕ್ಕೆ ಬಂದಿದ್ದರು. ಗಂಗಮ್ಮನ ಗುಡಿ ವೃತ್ತದಿಂದ ಶಾಂತಿನಗರಕ್ಕೆ ಹೋಗಲು ಆರೋಪಿ ಪವನ್ ಆಟೊ ಹತ್ತಿದ್ದರು. ಬಳ್ಳಾರಿ ರಸ್ತೆಯ ಗಂಗೇನಹಳ್ಳಿ ಬಳಿ ಆಟೊ ನಿಲ್ಲಿಸಿದ್ದ ಸೇನಾಧಿಕಾರಿ, ಕುಡಿಯಲು ನೀರು ತರಲೆಂದು ಅಂಗಡಿಗೆ ಹೋಗಿದ್ದರು. ಇದೇ ವೇಳೆಯೇ ಆರೋಪಿ, ಆಟೊ ಸಮೇತ ಪರಾರಿಯಾಗಿದ್ದ’ ಎಂದು ತಿಳಿಸಿದರು.