ಬೆಂಗಳೂರು: ಐಎಎಸ್ ಅಧಿಕಾರಿ ಕೆ.ಪಿ.ಮೋಹನ್ ರಾಜ್ ಅವರನ್ನು ಬೆಂಗಳೂರು ಮೆಟ್ರೊಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಬಿಎಂಆರ್ಡಿಎ) ಆಯುಕ್ತರನ್ನಾಗಿ ನೇಮಿಸಲಾಗಿದೆ.
ಐಎಎಸ್ ಅಧಿಕಾರಿಗಳಾದ ಗುರುದತ್ತ ಹೆಗಡೆ– ಮೈಸೂರು ನಗರ ಪಾಲಿಕೆ ಆಯುಕ್ತರು, ಶಿಲ್ಪಾ ಶರ್ಮಾ– ಸಿಇಒ, ಯಾದಗಿರಿ, ಕವಿತಾ ಎಸ್.ಮಣ್ಣಿಗೇರಿ– ನಿರ್ದೇಶಕಿ, ಸಮಗ್ರ ಮಕ್ಕಳ ರಕ್ಷಣ ಯೋಜನೆ ಇಲ್ಲಿಗೆ ವರ್ಗಾಯಿಸಲಾಗಿದೆ.