ಕೇರಳದ ಐಶ್ವರ್ಯ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕಾಲೇಜೊಂದರಲ್ಲಿ ಬಿ.ಎ ಪದವಿ ಮೊದಲ ವರ್ಷದಲ್ಲಿ ಓದುತ್ತಿದ್ದರು. ಅವರ ತಂದೆ ಗೋಪಾಲಕೃಷ್ಣ ಐದು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ತಾಯಿ ಅಂಜಲಿ ಹರಿಯಾಣದಲ್ಲಿ ಕೆಲಸ ಮಾಡುತ್ತಿದ್ದಾರೆ.
‘ಶನಿವಾರ ರಾತ್ರಿಯಷ್ಟೇ (ಸೆ. 28) ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತೆಯರ ಜೊತೆ ಸೇರಿ ಐಶ್ವರ್ಯ ಆಚರಿಸಿಕೊಂಡಿದ್ದರು. ತಾಯಿಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದರು’ ಎಂದು ಪೊಲೀಸರು ಹೇಳಿದರು.
‘ಭಾನುವಾರ ರಜೆ ಇದ್ದಿದ್ದರಿಂದ ಸ್ನೇಹಿತೆಯರು ಬೆಳಿಗ್ಗೆಯೇ ತಮ್ಮೂರಿಗೆ ಹೋಗಿದ್ದರು. ಸಂಜೆ ವಾಪಸ್ ಬಂದಿದ್ದ ಕೆಲ ಸ್ನೇಹಿತೆಯರು ಐಶ್ವರ್ಯ ಮೊಬೈಲ್ಗೆ ಕರೆ ಮಾಡಿದ್ದರು. ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅನುಮಾನಗೊಂಡು ಕೊಠಡಿಗೆ ಹೋಗಿ ನೋಡಿದಾಗಲೇ ವಿಷಯ ತಿಳಿದಿದೆ’ ಎಂದು ಮಾಹಿತಿ ನೀಡಿದರು.
‘ಹರಿಯಾಣದಲ್ಲಿ ಪಿಯುಸಿ ಮುಗಿಸಿದ್ದ ಐಶ್ವರ್ಯ ಅವರನ್ನು ಹೆಚ್ಚಿನ ವ್ಯಾಸಂಗಕ್ಕಾಗಿ ತಾಯಿ ಬೆಂಗಳೂರಿಗೆ ಕಳುಹಿಸಿದ್ದರು’ ಎಂದು ಪೊಲೀಸರು ವಿವರಿಸಿದರು.