‘ಈ ಬಜೆಟ್ನಲ್ಲಿ ಅಲೆಮಾರಿ ನಿಗಮಕ್ಕೆ ₹6 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ. ಪ್ರವರ್ಗ–1ರಡಿ ಬರುವ ಗೋಂಧಳಿ, ಬುಡುಬುಡುಕೆ, ಜೋಷಿ, ವಾಸುದೇವ ಸೇರಿದಂತೆ 46 ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿವೆ. ಇವರೆಲ್ಲ ಬಡತನದ ಜೀವನ ನಡೆಸುತ್ತಿದ್ದಾರೆ. ಇವರ ಸ್ವಾವಲಂಬಿ ಜೀವನಕ್ಕಾಗಿ ₹200 ಕೋಟಿ ಅನುದಾನವನ್ನು ನಿಗಮಕ್ಕೆ ನೀಡಬೇಕು’ ಎಂದುಸಂಘದ ಅಧ್ಯಕ್ಷ ಕೆ.ಎಂ.ಜಯರಾಮಯ್ಯ ಮನವಿ ಮಾಡಿದರು.