‘ಸಚಿವರೊಬ್ಬರು ನನ್ನ ಕುರಿತು ಆಡಿರುವ ಹಗುರ ಮಾತುಗಳಿಗೆ ಮಾಧ್ಯಮ ಪ್ರತಿನಿಧಿಗಳು ಹೊರಗಡೆ ಪ್ರತಿಕ್ರಿಯೆ ಬಯಸಿದರು. ನಾನು ನಿರಾಕರಿಸಿದೆ. ನಂತರ ವಾಪಸ್ ತೆರಳಿದರು. ಆದರೆ, ಇಲ್ಲಿ ನಡೆಯುತ್ತಿರುವ ಮಹತ್ವದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಇನ್ನು ಮುಂದಾದರೂ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ತಾಳ್ಮೆಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.