<p><strong>ಬೆಂಗಳೂರು:</strong> ‘ಅನುರುದ್ಧಿ ಕ್ರೆಡಿಟ್ ಕೋ–ಆಪರೇಟಿವ್ ಬ್ಯಾಂಕಿಗೆ ನುಗ್ಗಿದ್ದ ತೃತೀಯ ಲಿಂಗಿಗಳ ಗುಂಪೊಂದು ಚಿನ್ನದ ಸರ ಹಾಗೂ ₹1.65 ಲಕ್ಷ ನಗದು ಕದ್ದುಕೊಂಡು ಪರಾರಿಯಾಗಿದೆ’ ಎಂದು ಆರೋಪಿಸಿ ಬ್ಯಾಂಕ್ನ ವ್ಯವಸ್ಥಾಪಕಿ ಮಂಗಳಗೌರಿ ಅರಸ್ ಅವರು ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾರೆ.</p>.<p>‘ಸೆ. 23ರಂದು ನಡೆದಿರುವ ಕೃತ್ಯ ಸಂಬಂಧ ಶಿಕ್ಷಕರ ಲೇಔಟ್ನ ನಿವಾಸಿ ಮಂಗಳಗೌರಿ ದೂರು ನೀಡಿದ್ದಾರೆ. ನಾಲ್ವರು ತೃತೀಯ ಲಿಂಗಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ವಿದ್ಯಾರಣ್ಯಪುರ ಈಚಲಮರ ಬಸ್ ತಂಗುದಾಣ ಸಮೀಪ ಹೊಸದಾಗಿ ಬ್ಯಾಂಕ್ ಆರಂಭಿಸಲಾಗಿದೆ. ಸೆ. 23ರಂದು ಬೆಳಿಗ್ಗೆ ಕಚೇರಿ ಉದ್ಘಾಟಿಸಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ಭಿಕ್ಷೆ ಕೇಳುವ ನೆಪದಲ್ಲಿ ಬ್ಯಾಂಕ್ಗೆ ಬಂದಿದ್ದ ನಾಲ್ವರು ತೃತೀಯ ಲಿಂಗಿಗಳು, ದೃಷ್ಟಿ ತೆಗೆಯುವುದಾಗಿ ಹೇಳಿದ್ದರು.’</p>.<p>‘ದೇವರ ಪೂಜೆ ನಡೆಸಿದ್ದ ಸ್ಥಳಕ್ಕೆ ಹೋಗಿದ್ದ ಆರೋಪಿಗಳು, ಅಕ್ಷತೆ ಹಾಕಿದ್ದರು. ಅದೇ ವೇಳೆಯೇ ಪೂಜೆಗೆ ಇಟ್ಟಿದ್ದ 23 ಗ್ರಾಂ ಚಿನ್ನದ ಸರ ಹಾಗೂ ₹ 1.65 ಲಕ್ಷ ನಗದು ಕದ್ದಿದ್ದಾರೆ. ಕೆಲ ನಿಮಿಷಗಳಲ್ಲಿ ಬ್ಯಾಂಕ್ನಿಂದ ಹೊರಬಂದು ಆಟೊದಲ್ಲಿ ಪರಾರಿಯಾಗಿದ್ದಾರೆ. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಅನುರುದ್ಧಿ ಕ್ರೆಡಿಟ್ ಕೋ–ಆಪರೇಟಿವ್ ಬ್ಯಾಂಕಿಗೆ ನುಗ್ಗಿದ್ದ ತೃತೀಯ ಲಿಂಗಿಗಳ ಗುಂಪೊಂದು ಚಿನ್ನದ ಸರ ಹಾಗೂ ₹1.65 ಲಕ್ಷ ನಗದು ಕದ್ದುಕೊಂಡು ಪರಾರಿಯಾಗಿದೆ’ ಎಂದು ಆರೋಪಿಸಿ ಬ್ಯಾಂಕ್ನ ವ್ಯವಸ್ಥಾಪಕಿ ಮಂಗಳಗೌರಿ ಅರಸ್ ಅವರು ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾರೆ.</p>.<p>‘ಸೆ. 23ರಂದು ನಡೆದಿರುವ ಕೃತ್ಯ ಸಂಬಂಧ ಶಿಕ್ಷಕರ ಲೇಔಟ್ನ ನಿವಾಸಿ ಮಂಗಳಗೌರಿ ದೂರು ನೀಡಿದ್ದಾರೆ. ನಾಲ್ವರು ತೃತೀಯ ಲಿಂಗಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ವಿದ್ಯಾರಣ್ಯಪುರ ಈಚಲಮರ ಬಸ್ ತಂಗುದಾಣ ಸಮೀಪ ಹೊಸದಾಗಿ ಬ್ಯಾಂಕ್ ಆರಂಭಿಸಲಾಗಿದೆ. ಸೆ. 23ರಂದು ಬೆಳಿಗ್ಗೆ ಕಚೇರಿ ಉದ್ಘಾಟಿಸಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ಭಿಕ್ಷೆ ಕೇಳುವ ನೆಪದಲ್ಲಿ ಬ್ಯಾಂಕ್ಗೆ ಬಂದಿದ್ದ ನಾಲ್ವರು ತೃತೀಯ ಲಿಂಗಿಗಳು, ದೃಷ್ಟಿ ತೆಗೆಯುವುದಾಗಿ ಹೇಳಿದ್ದರು.’</p>.<p>‘ದೇವರ ಪೂಜೆ ನಡೆಸಿದ್ದ ಸ್ಥಳಕ್ಕೆ ಹೋಗಿದ್ದ ಆರೋಪಿಗಳು, ಅಕ್ಷತೆ ಹಾಕಿದ್ದರು. ಅದೇ ವೇಳೆಯೇ ಪೂಜೆಗೆ ಇಟ್ಟಿದ್ದ 23 ಗ್ರಾಂ ಚಿನ್ನದ ಸರ ಹಾಗೂ ₹ 1.65 ಲಕ್ಷ ನಗದು ಕದ್ದಿದ್ದಾರೆ. ಕೆಲ ನಿಮಿಷಗಳಲ್ಲಿ ಬ್ಯಾಂಕ್ನಿಂದ ಹೊರಬಂದು ಆಟೊದಲ್ಲಿ ಪರಾರಿಯಾಗಿದ್ದಾರೆ. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>