‘ನಗರದ ಕಾಲೇಜೊಂದರಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಕೌಶಿಕ್, ಊಟಕ್ಕೆಂದು ಸುಷ್ಮಾ ಜೊತೆ ಬೈಕ್ನಲ್ಲಿ ಬನ್ನೇರುಘಟ್ಟಕ್ಕೆ ಹೊರಟಿದ್ದರು. ಊಟ ಮುಗಿಸಿಕೊಂಡು ಕೆಂಪನಾಯಕನಹಳ್ಳಿಯ ಅಕ್ವೇರಲ್ ಗಾರ್ಮೆಂಟ್ಸ್ ಬಳಿ ಸಾಗುತ್ತಿದ್ದಾಗ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತರಾಗಿದ್ದಾರೆ’ ಎಂದು ಪೊಲೀಸರು
ಹೇಳಿದ್ದಾರೆ.