‘ಇದೇ 18ರಂದು ಕಚೇರಿಗೆ ಬಂದಿದ್ದ ಯೋಗೇಶ್, ಏಕಾಏಕಿ ನನ್ನ ಕೊಠಡಿಯೊಳಗೆ ಪ್ರವೇಶಿಸಿದ್ದರು.ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪ್ರಭಾರ ಹುದ್ದೆ ತನಗೆ ನೀಡುವಂತೆ ಏರುಧ್ವನಿಯಲ್ಲಿ ಕೇಳಿದ್ದರು. ಕಚೇರಿ ಸಿಬ್ಬಂದಿಯನ್ನು ಕರೆದು ಕೇಳಿದಾಗ ಅವರು ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂಬುದನ್ನು ಗಮನಕ್ಕೆ ತಂದಿದ್ದರು. ಅಷ್ಟಕ್ಕೆ ನನ್ನ ಮೇಲೆ ರೇಗಾಡಿದ್ದ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.