ಹಂಪಿ ನಗರದಲ್ಲಿ ನಾಗರಿಕರಿಗೆ ಪಾನಕ ಹಾಗೂ ಮಜ್ಜಿಗೆ ವಿತರಿಸಲಾಯಿತು. ವಿಲ್ಸನ್ಗಾರ್ಡನ್ನ ಮಾರುತಿ ವಿದ್ಯಾಲಯ, ಜಯಕರ್ನಾಟಕ ಸಂಘಟನೆಯ ಕೇಂದ್ರ ಕಚೇರಿಯಲ್ಲೂಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜಾಜಿನಗರ ಕನ್ನಡ ಸಂಘದ ವತಿಯಿಂದಲೂ ಜಯಂತಿ ಏರ್ಪಡಿಸಲಾಗಿತ್ತು. ಕೆ.ಆರ್.ಪುರದ ರೆಡ್ಡಿ ಪಾಳ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.