ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯದ ಬಸವನಗುಡಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಚೇರಿಯನ್ನುಬನಶಂಕರಿ ಮೂರನೇ ಹಂತಕ್ಕೆ ಸ್ಥಳಾಂತರಿಸಲಾಗಿದೆ.
ತ್ಯಾಗರಾಜನಗರದಸಿ.ಟಿ.ಬೆಡ್ನ ಸಿ.ಕೆ.ಅಚ್ಚುಕಟ್ಟು ಮೈದಾನದ ಬಳಿಯ ಬಿಬಿಎಂಪಿ ಕಟ್ಟಡದಲ್ಲಿ ಬಸವನಗುಡಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಇತ್ತು. ಈ ಸ್ಥಳದಲ್ಲಿ ವಿವಿಧೋದ್ದೇಶ ಬಳಕೆಯ ಕಟ್ಟಡ ನಿರ್ಮಾಣವಾಗಲಿದೆ. ಹಾಗಾಗಿ ಈಗಿರುವ ಕಟ್ಟಡವನ್ನು ತೆರವುಗೊಳಿಸಬೇಕಿದೆ. ಹಾಗಾಗಿ ಕಚೇರಿಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಧೀರೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.
ಕಚೇರಿಯ ಹೊಸ ವಿಳಾಸ: ಬನಶಂಕರಿ 3ನೇ ಹಂತ, ಶ್ರೀಕಂಠೇಶ್ವರ ಪಾರ್ಕ್, ವಿದ್ಯಾಪೀಠ ವಾರ್ಡ್, ಬೆಂಗಳೂರು ಒನ್ ಹತ್ತಿರ, ಬಿಬಿಎಂಪಿ ಕಟ್ಟಡ, ಚೆನ್ನಮ್ಮನಕೆರೆ ಅಚ್ಚುಕಟ್ಟು ಬೆಂಗಳೂರು-85.