‘ಗುತ್ತಿಗೆದಾರರ ಸಂಘ ನೀಡಿರುವ ಮನವಿಗೂ ಹೊಸ ಆದೇಶಗಳಿಗೂ ಸಂಬಂಧ ಇಲ್ಲ. ಅವರ ಬಿಲ್ಗಳು 22 ತಿಂಗಳಷ್ಟು ಹಳೆಯವು. ನಾನು ಈಗ ಮಾಡಿರುವ ಆದೇಶ ಆ.4ರಿಂದ ಜಾರಿಯಲ್ಲಿದೆ. ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ. ಮೊದಲಿನಂತೆ ಕೇಂದ್ರ ಕಚೇರಿಯಲ್ಲಿ ಬಿಲ್ ಹಣ ಪಾವತಿಯಾಗುವುದಿಲ್ಲ. ವಲಯ ಆಯುಕ್ತರು ಆಯಾ ವ್ಯಾಪ್ತಿಯ ಕಾಮಗಾರಿಗಳ ಬಿಲ್ಗಳನ್ನು ಪಾವತಿ ಮಾಡುತ್ತಾರೆ. ಇದಲ್ಲದೆ, ಟಿವಿಸಿಸಿ ಹಾಗೂ ಗುಣಮಟ್ಟ ನಿಯಂತ್ರಣ ಕೋಶಕ್ಕೆ ಸಿಬ್ಬಂದಿ ನೀಡಿ, ಅವರು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ ಅಷ್ಟೆ. ಇದರಿಂದ ಟೇಬಲ್ಗಳೇನೂ ಹೆಚ್ಚಾಗುವುದಿಲ್ಲ’ ಎಂದರು.