ಬೆಂಗಳೂರು: ನಗರಕ್ಕೆ ವಿಶೇಷ ಮೂಲಸೌಲಭ್ಯ ಕಲ್ಪಿಸಲು ಕೊಟ್ಟ ವಿಶೇಷ ಅನುದಾನದ ಬಹುಪಾಲು ಮೊತ್ತ ಖರ್ಚಾಗದೇ ಉಳಿದಿದೆ. ಮಹಾಲೇಖಪಾಲರ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಅನುದಾನವನ್ನು ಸರಿಯಾಗಿ ಬಳಸದ ಕಾರಣ ಹೊಸ ಅನುದಾನ ಪಡೆಯಲು ಅಡೆತಡೆ ಉಂಟಾಗಿದೆ. ಉಳಿಕೆ ಅನುದಾನದ ವಿವರ ಹೀಗಿದೆ.
₹ 7,300 ಕೋಟಿ -2016– 17ರಲ್ಲಿ ಮಂಜೂರಾದ ವಿಶೇಷ ಅನುದಾನ
₹ 4,970 ಕೋಟಿ - ಬಿಡುಗಡೆಯಾದ ಹಣ
₹ 2,330 ಕೋಟಿ -ಬಿಡುಗಡೆಗೆ ಬಾಕಿಯಿರುವ ಮೊತ್ತ
₹ 1,279 ಕೋಟಿ -ಬಿಡುಗಡೆಯಾದ ಹಣದಲ್ಲಿ ಖರ್ಚಾಗದ ಮೊತ್ತ
ಯಾವುದಕ್ಕೆ ಬಳಕೆಯಾಗಬೇಕಿತ್ತು?
₹ 1,079 ಕೋಟಿ -ವಿಶೇಷ ಮೂಲಸೌಲಭ್ಯಕ್ಕೆ
₹ 76 ಕೋಟಿ -ಉಪನಗರ ರೈಲು ಯೋಜನೆಗೆ
₹ 126 ಕೋಟಿ - ಜಲಮಂಡಳಿಗೆ
ಏನೇನು ವಿಶೇಷ ಮೂಲಸೌಲಭ್ಯ?
ರಸ್ತೆ, ಉದ್ಯಾನ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ನಾಗರಿಕ ಸುರಕ್ಷತೆ, ಸುಗಮ ಸಂಚಾರ ವ್ಯವಸ್ಥೆ, ನಗರದ ಸ್ವಚ್ಛತೆ, ಆರೋಗ್ಯ ಸೌಲಭ್ಯ