ಮೊದಲಿನ ಸಹಾಯ ಆ್ಯಪ್ನಲ್ಲಿಯೂ ಇದೇ ರೀತಿ ಆಗುತ್ತಿದ್ದಾಗ ಇದು ತಾಂತ್ರಿಕ ದೋಷ ಎಂದಿದ್ದ ಬಿಬಿಎಂಪಿ, ಸುಧಾರಿತ ಆ್ಯಪ್ ಆಗಿ ‘ಸಹಾಯ 2.0’ ಅನ್ನು ಬಳಕೆಗೆ ತಂದಿತ್ತು. ಘನ ತ್ಯಾಜ್ಯ ನಿರ್ವಹಣೆ, ರಸ್ತೆ, ಪಾದಚಾರಿ ಮಾರ್ಗ, ಬೀದಿದೀಪ, ಒಳಚರಂಡಿ ನಿರ್ವಹಣೆ ಮತ್ತಿತರ ಮೂಲಸೌಕರ್ಯ ಸಂಬಂಧಿಸಿದಂತೆ ದೂರುಗಳನ್ನು ನೀಡಬಹುದು. ಬಿಬಿಎಂಪಿ ಮಾತ್ರವಲ್ಲದೆ, ಜಲಮಂಡಳಿ, ಬೆಸ್ಕಾಂ, ಬಿಡಿಎ ವಿಷಯಗಳನ್ನೂ ಇದರ ಜೊತೆಗೆ ಸಂಯೋಜನೆಗೊಳಿಸಲಾಗಿದೆ. ಆ್ಯಪ್ ಅನ್ನು ಮೇಲ್ದರ್ಜೆಗೇರಿಸಿದ್ದರೂ ಕೆಲಸಗಳು ಮಾತ್ರ ನಡೆಯುತ್ತಿಲ್ಲ. ಸಮಸ್ಯೆಗಳು ಪರಿಹಾರವಾಗುತ್ತಿಲ್ಲ ಎಂದು ನಾಗರಿಕರು ದೂರುತ್ತಾರೆ.