<p><strong>ಬೆಂಗಳೂರು</strong>: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2025–26ನೇ ಸಾಲಿನ ಬಜೆಟ್ ಶನಿವಾರ ಮಂಡಿಸಲಾಯಿತು. </p><p>ಚುನಾಯಿತ ಸಮಿತಿ ಇಲ್ಲದೆ ಸತತ ಐದನೇ ಬಾರಿಗೆ ಮಂಡನೆಯಾದ ಬಜೆಟ್ ಇದು. </p>.ಬಿಬಿಎಂಪಿ ಗುತ್ತಿಗೆ ಅವ್ಯವಹಾರ: ಪುನರ್ ವಿಚಾರಣೆಗೆ ಆದೇಶ.<p>‘ಬ್ರ್ಯಾಂಡ್ ಬೆಂಗಳೂರು’ ಕಲ್ಪನೆಯಡಿ ಮಂಡಿಸಲಾದ ಈ ಬಜೆಟ್ನ ಗಾತ್ರ ₹ 19,930 ಕೋಟಿ. ಈ ಬಾರಿಯ ಬಜೆಟ್ ಗಾತ್ರ ಕಳೆದ ಬಾರಿಗಿಂತ ಸುಮಾರು ಶೇ 50ರಷ್ಟು ಹೆಚ್ಚಳವಾಗಿದೆ.</p><p>2025–26ನೇ ಸಾಲಿನಿಂದ ಆಸ್ತಿ ತೆರಿಗೆ ಜೊತೆ ಘನ ತ್ಯಾಜ್ಯ ನಿರ್ವಹಣೆ ಶುಲ್ಕ ವಿಧಿಸುವ ಪ್ರಸ್ತಾಪ ಬಜೆಟ್ನಲ್ಲಿದೆ.</p>.ಆಸ್ತಿ ತೆರಿಗೆ 2 ವರ್ಷ ಬಾಕಿ ಉಳಿದರೆ ಶೇ 100 ದಂಡ: ಬಿಬಿಎಂಪಿ.<p>ಬಿಬಿಎಂಪಿಯ ವಿಶೇಷ ಆಯುಕ್ತ (ಹಣಕಾಸು) ಡಾ. ಹರೀಶ್ ಕುಮಾರ್ ಕೆ. ಅವರು ಬಜೆಟ್ ಮಂಡಿಸಿದರು. ಬಜೆಟ್ನ ಬಹುಪಾಲು ಭಾಗ ಸುಮಾರು ಶೇ 65ರಷ್ಟು ಪಾಲನ್ನು ಅಭಿವೃದ್ಧಿ ಕೆಲಸಗಳಿಗೆ ಮೀಸಲಿಡಲಾಗಿದೆ.</p><p>ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬಜೆಟ್ ಮಂಡನೆ ವೇಳೆ ಹಾಜರಿದ್ದರು.</p>.BBMP: ಆಸ್ತಿ ಹರಾಜಿಗೆ ಬಾರದ ಬಿಡ್ಡುದಾರರು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2025–26ನೇ ಸಾಲಿನ ಬಜೆಟ್ ಶನಿವಾರ ಮಂಡಿಸಲಾಯಿತು. </p><p>ಚುನಾಯಿತ ಸಮಿತಿ ಇಲ್ಲದೆ ಸತತ ಐದನೇ ಬಾರಿಗೆ ಮಂಡನೆಯಾದ ಬಜೆಟ್ ಇದು. </p>.ಬಿಬಿಎಂಪಿ ಗುತ್ತಿಗೆ ಅವ್ಯವಹಾರ: ಪುನರ್ ವಿಚಾರಣೆಗೆ ಆದೇಶ.<p>‘ಬ್ರ್ಯಾಂಡ್ ಬೆಂಗಳೂರು’ ಕಲ್ಪನೆಯಡಿ ಮಂಡಿಸಲಾದ ಈ ಬಜೆಟ್ನ ಗಾತ್ರ ₹ 19,930 ಕೋಟಿ. ಈ ಬಾರಿಯ ಬಜೆಟ್ ಗಾತ್ರ ಕಳೆದ ಬಾರಿಗಿಂತ ಸುಮಾರು ಶೇ 50ರಷ್ಟು ಹೆಚ್ಚಳವಾಗಿದೆ.</p><p>2025–26ನೇ ಸಾಲಿನಿಂದ ಆಸ್ತಿ ತೆರಿಗೆ ಜೊತೆ ಘನ ತ್ಯಾಜ್ಯ ನಿರ್ವಹಣೆ ಶುಲ್ಕ ವಿಧಿಸುವ ಪ್ರಸ್ತಾಪ ಬಜೆಟ್ನಲ್ಲಿದೆ.</p>.ಆಸ್ತಿ ತೆರಿಗೆ 2 ವರ್ಷ ಬಾಕಿ ಉಳಿದರೆ ಶೇ 100 ದಂಡ: ಬಿಬಿಎಂಪಿ.<p>ಬಿಬಿಎಂಪಿಯ ವಿಶೇಷ ಆಯುಕ್ತ (ಹಣಕಾಸು) ಡಾ. ಹರೀಶ್ ಕುಮಾರ್ ಕೆ. ಅವರು ಬಜೆಟ್ ಮಂಡಿಸಿದರು. ಬಜೆಟ್ನ ಬಹುಪಾಲು ಭಾಗ ಸುಮಾರು ಶೇ 65ರಷ್ಟು ಪಾಲನ್ನು ಅಭಿವೃದ್ಧಿ ಕೆಲಸಗಳಿಗೆ ಮೀಸಲಿಡಲಾಗಿದೆ.</p><p>ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬಜೆಟ್ ಮಂಡನೆ ವೇಳೆ ಹಾಜರಿದ್ದರು.</p>.BBMP: ಆಸ್ತಿ ಹರಾಜಿಗೆ ಬಾರದ ಬಿಡ್ಡುದಾರರು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>