‘ಇಂದಿರಾನಗರ 2ನೇ ಹಂತದಲ್ಲಿನ ಬಿನ್ನಮಂಗಲ ಸರ್ವೆ ನಂಬರ್ 13ರಲ್ಲಿ 11 ಗುಂಟೆ ಜಾಗದಲ್ಲಿ ಖಾಸಗಿಯವರು ಮೂರು ಶೆಡ್ ನಿರ್ಮಿಸಿಕೊಂಡಿದ್ದರು. ಸುಮಾರು ₹18 ಕೋಟಿ ಮೌಲ್ಯದ ಆಸ್ತಿ ಇದಾಗಿದ್ದು, ಹಲವು ಬಾರಿ ಮುನ್ನೆಚ್ಚರಿಕೆ ನೀಡಿದ್ದರೂ ಒತ್ತುವರಿದಾರರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಸುಪ್ರೀಂ ಕೋರ್ಟ್ ಬಿಡಿಎ ಪರ ತೀರ್ಪು ನೀಡಿತ್ತು. ಮಂಗಳವಾರ ವಿಶೇಷ ಕಾರ್ಯಪಡೆ ಸಿಬ್ಬಂದಿ ಶೆಡ್ ತೆರವುಗೊಳಿಸಿ ಆಸ್ತಿ ವಶಕ್ಕೆ ಪಡೆದರು’ ಎಂದು ಬಿಡಿಎ ತಿಳಿಸಿದೆ.