ಭಾನುವಾರ ನಡೆಯುವ ಸಂವಾದದಲ್ಲಿ ಹವಾಮಾನ ವೈಪರೀತ್ಯ ಕುರಿತು ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್, ಚಿತ್ರಾಂಗದ ಚೌಧರಿ, ನವ್ರೋಜ್ ದುಬಾಷ್, ಟಿಮ್ ಫ್ಲಾನರಿ ಬೆಳಕು ಚೆಲ್ಲಲಿದ್ದಾರೆ. ಕನ್ನಡ ನೆಟ್ಟಿಗರ ಅಕ್ಷರ ಲೋಕದಲ್ಲಿನ ಬೆಳವಣಿಗೆಯನ್ನು ರಾಜೇಂದ್ರ ಪ್ರಸಾದ್ ಹಾಗೂ ತೀನಾ ಶಶಿಕಾಂತ್ ‘ಎಲ್ಲಿಗೆ ಬಂತು ನೆಟ್ ಸಾಹಿತ್ಯ’ ಎಂಬ ವಿಚಾರದ ಚರ್ಚೆಯಲ್ಲಿ ತೆರೆದಿಡಲಿದ್ದಾರೆ. ಬ್ಯಾಂಕ್ ಠೇವಣಿಗಳ ಅಸುರಕ್ಷತೆ ಬಗ್ಗೆ ವಿವೇಕ್ ಕೌಲ್ ವಿಚಾರ ಹಂಚಿಕೊಳ್ಳಲಿದ್ದಾರೆ.